Monthly Archives: ಜನವರಿ 2009

ಯಾರೋ ಬರೆದಿದ್ದು ನೆನಪು ಬರ್ತಾ ಇಲ್ಲ. ಆದರು ಮನಸ್ಸಿಗೆ ಹಿಡಿಸಿದ ಸಾಲುಗಳು!!!

ಕವನಗಳನ್ನ ಸಂಗ್ರಹಿಸೋದು ನನ್ನ ಹವ್ಯಾಸ. ನಾನು ಸಂಗ್ರಹಿಸಿರೋದ್ರಲ್ಲಿ ನನಗೆ ಹಿಡಿಸಿದ ನಾಲ್ಕು ಹನಿಗವನ  

 

 

ಮಾತು!!!!!!!

 

 

ಸ್ಮಶಾನದಲ್ಲಿ ಕಣ್ಣೀರಿನ ಮಾತು
ತೊಟ್ಟಿಲಿನಲಿ ಮಗುವಿನ ನಗುವಿನ ಮಾತು
ಬೆಳಗಿನ ಜಾವದಲಿ ಮಂಜಿನ ಮಾತು
ಸಂಜೆಗತ್ತಲಿನ ಮಬ್ಬಿನ ಮಾತು
ಹುಣ್ಣಿಮೆ ರಾತ್ರಿಯ ಬೆಳದಿಂಗಳ ಮಾತು
ಅಮಾವಾಸ್ಯೆಯ ಕಾರ್ಗತ್ತಲಿನ ಮಾತು
ಮಾತಿನ ಮತ್ತು
ತಿಳಿದವರಿಗೆ ಗೊತ್ತು
ಕಳೆಸುವುದು ಹೊತ್ತು
ಇದರಿಂದ ಬೇರೆ ಕೆಲಸಗಳಿಗೆ ಕುತ್ತು
ಎಲ್ಲೆಲ್ಲೂ ಮೌನದ ಮಾತು

ಮಾತುಗಳು
ಮರೆತುಹೋಗಿವೆ.
ಕವನಗ್ಳು ಕಳೆಗುಂದಿವೆ.
ಶಾಯರಿಗಳಲ್ಲಿ ಸತ್ವವಿಲ್ಲ.
ಗಝಲ್ ಗಳು ಗೂಡು ಸೇರಿವೆ.
ಈಗ ಉಳಿದಿರುವುದು
ಕೇವಲ ನನ್ನನಿನ್ನ ಮೌನ ಸಂಭಾಷಣೆ.

ಪ್ರೀತಿ!!!!!!!!
  

ಪ್ರೀತಿಯೆಂದರೆ……
ಸಾಗರದಷ್ಟು ಆಳ
ಆಗಸದಷ್ಟು ವಿಶಾಲ
ಹೇಳಿಕೊಂಡರೆ ಗೊಂದಲ
ಹೇಳದಿರೆ ತಳಮಳ
ಅರಿತರೆ ನಿರಾಳ
ಅರಿಯದಿರೆ ಕರಾಳ
ಪ್ರೀತಿಯೆಂದರೆ………
ಅದೊಂದು ಗಾಳ!
ಸಿಲುಕಿದರೆ ಬಿಡಿಸಲಾರದ ಬಂಧ
ಸಿಲುಕದಿರೆ ನೋವು ಅನಂತ

ನೀ ಜೊತೆ ಇದ್ದಾಗ
ನಿನ್ನನ್ನೇ ಕೇಳುತ್ತಿದ್ದೆ
ಗೆಳತಿ ಪ್ರೀತಿ ಎಂದರೆ
ಏನೆಂದು . . .
ನೀ ನನ್ನನ್ನು
ಅಗಲಿದಾಗ
ನನಗನ್ನಿಸಿತು
ಅದು ನೀನೇಎಂದು.

ನಮಗೆ ಸಹಾಯ ಮಾಡುವಿರಾ??????

ಒಂದು ಶುಕ್ರವಾರ ದಿನ ಬೆಳಗ್ಗೆ ಬೇಗ ಎದ್ದು  ಎಂದಿನಂತೆ ದೇವಸ್ಥಾನಕ್ಕೆ ಹೊರಡಲು ರೆಡಿಯಾದೆ. ಹಾಗೇ ದೇವಸ್ಥಾನಕ್ಕೆ ಹೋಗಿ ವಾಪಾಸು ಬರೋವಾಗ ಬಸ್ಸು ಕೈ ಕೊಟ್ಟ ಪರಿಣಾಮ ನಡೆದುಕೊಂಡು ಬರಬೇಕಾಯಿತು.ಬರುತ್ತಿರುವಾಗ ದಾರಿಯಲ್ಲಿ ಪುಟ್ಟ ಎರಡು ಮಕ್ಕಳು ಆಡೋದನ್ನ ನೋಡಿದೆ.ಪಾಪ ಮಕ್ಕಳನ್ನು ನೋಡಿದರೆ ಮೈಯಲ್ಲಿ ಬಟ್ಟೆ ಇಲ್ಲ ಬರಿ ಚಡ್ಡಿಲಿ ಇದ್ದವು ನೀರು  ನೋಡದೆ ವರುಷಗಳೇ ಕಳೆದಂತಿದ್ದ  ಮೈ ಕೈ, ಎಣ್ಣೆ ಕಾಣದ ತಲೆಗೂದಲು ನೋಡಿದರೆ ಪಾಪ ಅನಿಸುತಿತ್ತು. ನನ್ನ ಕೈಯಲ್ಲಿ ಇದ್ದ ಪ್ಲಾಸ್ಟಿಕ್ ಕವರ್ ನೋಡುತ್ತಾ ನಿಂತ ಮಕ್ಕಳನ್ನು ನೋಡಿ ಬೇಜಾರಾಗಿ ಅದರಲಿದ್ದ ಪ್ರಸಾದನ ಅವರಿಗೆ ಕೊಟ್ಟು ಅವರ ತಂದೆ ತಾಯಿನ ನೋಡಬೇಕೆಂದು ಕಡೆ ಹೋದೆ. ಆದ್ರೆ ಅಲ್ಲಿ ಯಾರು ಮಕ್ಕಳ ತಂದೆ ತಾಯಿ ಎಂದು ಗೊತ್ತಾಗಲೇ ಇಲ್ಲ.  ಅಲ್ಲೇ ಇದ್ದ ಒಬ್ಬರನ್ನು ಕೇಳಿದೆ ಅದಿಕ್ಕೆ ಅವರು ಅವರಿಲ್ಲಿ ಇಲ್ಲ ಅವರು ಇನ್ನೊಂದು ಸೈಟಲ್ಲಿ ಇದ್ದಾರೆ ಅಂದರು. ನನಗೆ ಕೋಪ ಬಂದು ತಂದೆ ತಾಯಿಗೆ ಬೈಯುತ್ತ ಮಕ್ಕಳ ಹತ್ತಿರ ಹೋಗಣ ಅಂತ ವಾಪಸ್ಸು ಬರೋವಾಗ ಅಲ್ಲಿ ಇನ್ನೂ ನಾಲಕ್ಕು ಜನ ಮಕ್ಕಳಿದ್ದರು. ಎಲ್ಲರೂ ಒಂದೊಂದು ವರ್ಷ ಹೆಚ್ಹು ಕಡಿಮೆ ಇದ್ದ ಹಾಗಿದ್ದರು ಎಲ್ಲರೂ ಹದಿಮೂರು ವರುಷದ ಕೆಳಗಿನವರು. ಆದ್ರೆ ಮಕ್ಕಳು ಆಟ ಆಡುತಿರಲಿಲ್ಲ ಅದರ ಬದಲು ಕೆಲಸ ಮಾಡುತಿದ್ದರು. ಕಾಲಲ್ಲಿ ಚಪ್ಪಲಿ ಇಲ್ಲ ಮೈಯಲ್ಲಿ ಸರಿಯಾದ ಬಟ್ಟೆ ಇಲ್ಲ ಬರೀ ತಲೇಲಿ ನಾಲಕ್ಕು ಐದು ಇಟ್ಟಿಗೆಗಳನ್ನ ಹೊತ್ತು ತರುತಿದ್ದರು. ತುಂಬಾನೇ ಬೇಜಾರಾಗಿ ಅವರನನ್ನ ನಿಲ್ಲಿಸಿ ಅವರ ಭಾರನ ಕೆಳಗಿಳಿಸಿ ಮಾತಾಡಿಸಿದೆ. ಅಪ್ಪ ಅಮ್ಮ ಎಲ್ಲಿ ಅಂದಾಗ ಮಕ್ಕಳು ಊರಲ್ಲಿ ಇದ್ದಾರೆ. ಇಲ್ಲಿ ಯಾರ ಜೋತೆಗಿದ್ದೀರ  ಅಂತ ಕೇಳಿದರೆ ಚಿಕಪ್ಪ ಹಾಗೂ ಚಿಕ್ಕಮ್ಮನ ಜೊತೆ ಇದ್ದೀವಿ. ಶಾಲೆಗೆ ಹೋಗಲ್ವೇನೋ ಅಂತ ಕೇಳಿದರೆ ಅದಕಂತಾನೆ ಕಳಿಸಿದ್ರು ಊರಿಂದ. ಆದ್ರೆ ನಮಗಿದೆ ಶಾಲೆಯಾಗಿದೆ. ಹೋಗೋ ಅಸೆ ಇದೆ ಆದ್ರೆ ಇವರು ಕಳಿಸಲ್ಲ. ಮತ್ತೆ ಕೆಲವರನ್ನ ವಿಚಾರಿಸಿದಾಗ ಮಕ್ಕಳನ್ನ ಶಾಲೆಗೆ ಸೇರಿಸಿದರು ಮಕ್ಕಳನ್ನ ಸಾಕುವವರು ಶಾಲೆ ಬಿಡಿಸಿ ಇಲ್ಲಿಗೆ ಕರೆತರುತ್ತಾರೆ ಅಂತ ಹೇಳಿ ಜಾರಿ ಕೊಂಡರು. ನಮ್ಮ   ಸರಕಾರ ಎಷ್ಟು ಯೋಜನೆಗಳನ್ನ ತಂದರು ಪ್ರಯೋಜನ ಇಲ್ಲ ಎಂದು ಆಗ ಅರ್ಥ ವಾಯಿತು. ತರ ಮಕ್ಕಳನ್ನು ದುಡಿಸಿಕೊಳ್ಳುವವರನ್ನು ಏನು ಮಾಡೋದು? ಇನ್ನೂ ಕೆಲವು ಕಡೆ ಮಕ್ಕಳನ್ನ ದುಡಿಸ್ತಾರೆ. ಯಾರಾದರು  ಅಧಿಕಾರಿಗಳು ಬರುತಿದ್ದಾರೆ ಎಂದು ಗೊತ್ತಾದರೆ ಸಾಕು ಮಕ್ಕಳನ್ನ ರಜೆ ಕೊಟ್ಟು ಮನೆಗೆ  ಕಳುಹಿಸುತ್ತಾರೆ ಇಂತವರಿಗೆಲ್ಲ ಪಾಠ ಕಲಿಸಬೇಕು. ಮಕ್ಕಳನ್ನ ದುಡಿಸುವವರಿಗಿಂತ ಮಕ್ಕಳಿಗೆ ಕೆಲಸ ಕೊಡುವವರಿಗೆ ಮೊದಲು ತಕ್ಕ ಶಾಸ್ತಿ ಮಾಡಬೇಕು. ಯಾಕೆಂದರೆ ಅವರು ಕೆಲಸಾನೇ ಕೊಟ್ಟಿಲ್ಲ ಅಂದರೆ ಮಕ್ಕಳು ದುಡಿಯುತಿದ್ರ ಇಲ್ಲ ಅಲ್ವಾ!! ನಂತರ ದುಡಿಸುವವರ ಮೇಲೆ ಕಠಿಣ ಶಿಕ್ಷೆಯಾಗಬೇಕು. ಎಲ್ಲೂ ಬಾಲಕಾರ್ಮಿಕರು ಇರಬಾರದು ನೀವೇನಂತೀರಾ? ನಾನು ಮಕ್ಕಳನ್ನ ನೋಡಿದ ದಿನ ದಿಂದ ನನ್ನ ಕಣ್ಣಿಗೆ ಎಲ್ಲಿ ಬಾಲ ಕಾರ್ಮಿಕರು ನೋಡ ಸಿಗುತ್ತಾರೋ ಅಲ್ಲೇ ಹತ್ತಿರ ಇರೋ ಶಾಲೆಗೆ ವಿಷಯ ತಿಳಿಸುತ್ತೇನೆ ಕೂಡಲೇ ಅವರು ಬಂದು ಮಕಳನ್ನ ಶಾಲೆಗೆ ಕರೆದುಕೊಂಡುಹೋಗುತ್ತಾರೆ. ಹೀಗೆ ನಿಮಗೂ ಅಷ್ಟೇ ಎಲ್ಲಾದರು ಇಂಥ ಮಕ್ಕಳು ನೋಡ ಸಿಕ್ಕರೆ ಖಂಡಿತ ಸಮೀಪ ಇರೋ ಶಾಲೆಗೆ ವಿಷಯ ತಿಳಿಸಿ. ಬಾಲಕಾರ್ಮಿಕ ಅನ್ನೋ ಪಿಡುಗುನ ನಿರ್ಮೂಲನೆ ಮಾಡೋಣ. ಇಂತಹ ಮಕ್ಕಳಿಗೆ ಸಹಾಯ ಮಾಡುತ್ತೀರ ತಾನೆ?

ತಾಯಿಯೇ ದೇವರು ನೀವೇನಂತೀರಾ?

ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತ್ತಿರುವೆ ನಾನು!!!!!
ಎಷ್ಟು ಅರ್ಥಪೂರ್ಣವಾಗಿರೋ ಹಾಡು ಎಷ್ಟು ಕೇಳಿದರು ಇನ್ನಷ್ಟು ಕೇಳಬೇಕೆನ್ನೋ ಆಸೆ. ಮಗು ತಾಯಿಯ ಹೊಟ್ಟೆಯಿಂದ ಹೊರಬರಲು ಕಾತರಿಸುತ್ತಿದೆ. ತನ್ನ ತಾಯಿನ ಕೇಳಿಕೊಳ್ಳುತ್ತಾ  ಇದೆ. ನನಗೆ ಆದಷ್ಟು ಬೇಗ ಪ್ರಪಂಚದ ಬೆಳಕು ತೋರಿಸು ಎಂದು ತನ್ನ ಮೆತ್ತನೆಯ ಕಾಲಿಂದ ತಾಯಿಯ ಹೊಟ್ಟೆಗೆ ಒದೆಯುತ್ತಿದೆ ತಾಯಿಯು ಆ ನೋವಿಂದ ಆನಂದ ಪಡುತ್ತಾಳೆ. ಯಾವಾಗ ನಾನು ಈ ಮಗುವಿನ ಮುಖ ನೋಡುವೆನೋ ಎಂದು ಕಾತರಿಸುತ್ತಾಳೆ. ನನ್ನ ಅಮ್ಮಾ  ಹೇಳುತಿದ್ದ ಮಾತು ಒಂದು ಹೆಣ್ಣು ಪರಿಪೂರ್ಣ ಹೆಣ್ಣು ಆಗಲು  ಆಕೆ ತಾಯಿಯಾಗಲೇ ಬೇಕು. ಅದು ನಿಜಾನೆ ಮದುವೆಯಾಗಿ ಒಂದು ವರುಷ ಕಳೆಯುವಾಗಲೇ ಹೆಣ್ಣು ಗರ್ಭಿಣಿ ಆಗಬೇಕು ಇಲ್ಲ ಅಂದರೆ ಈ ಜನರ ಬಾಯಿಯ ಮಾತಾಗುತ್ತಾಳೆ. ಏನಮ್ಮ ಹೋಗಿ ಒಳ್ಳೆ ಡಾಕ್ಟರ್ಗೆ ತೋರಿಸ್ಕೊಂಡು ಬರಬಾರದ ಅಂತ ಹೇಳೋರು  ಕೆಲವರು. ಏನೋ ಸಮಸ್ಯೆ ಇರಬೇಕು ಅದಿಕ್ಕೆ ಇನ್ನೂ ಮಡಿಲು ತುಂಬಿಲ್ಲ ಅನ್ನೋರು ಇನ್ನೂ ಕೆಲವರು. ಇವರಿಗೆಲ್ಲ ಉತ್ತರ ಕೊಡೋಕ್ಕಾಗದೆ ಏನು ಹೇಳೋಕು ಆಗದೆ ಪಡುವ ಪಾಡು ಆಕೆಗೆ ಗೊತ್ತು. ನನ್ನಲ್ಲಿ ಎಷ್ಟೋ ಜನ ಕೇಳಿದ ಮಾತು ನೀನು ತಾಯಿನ ದೇವರು ಅನ್ನುತ್ತೀಯಲ್ಲ  ಹಾಗಾದರೆ ಅಪ್ಪ ಯಾರು ಗುಮ್ಮನ ಅಂತ. ಅಮ್ಮಾ ಯಾವತಿದ್ರು  ದೇವರೇ ಯಾಕೆಂದರೆ ನನಗೆ ಈ ಪ್ರಪಂಚದ ಬೆಳಕನ್ನು ತೋರಿಸಿದವಳು ತಾಯಿ ಅಷ್ಟೇ ಅಲ್ಲ ತಾನೆಷ್ಟು ನೋವು ಪಟ್ಟರು ತನ್ನ ಮಗುವಿಗೆ ನೋವು ಪಡಿಸಲು ಇಷ್ಟ ಪಡೋದಿಲ್ಲ ಒಂಬತ್ತು ತಿಂಗಳು ಮಗುನ ಅದೆಷ್ಟು ಎಚ್ಚರಿಕೆಯಿಂದ  ಕಾಪಾಡಿ ಅದನ್ನ ಈ ಭೂಮಿಗೆ ತರೋವಾಗ ಆಕೆ ಪಡುವ ವೇದನೆ ಅಷ್ಟಿಷ್ಟಲ್ಲ  ಎಲ್ಲ ವೇದನೆಯನ್ನು ಆ ಮಗುವಿನ ಆಳುವಲ್ಲಿ ಹಾಗೂ ಮಗುವಿನ ಮುಖ ನೋಡಿ ಮರೆಯುತ್ತಾಳೆ. ಇದಕ್ಕೆ ತಾಯಿ ಯಾವತಿದ್ದರು ದೇವರು. ಆದರೆ ಅಪ್ಪ ಇಷ್ಟೆಲ್ಲಾ ನೋವು ಅನುಭವಿಸುತ್ತಾರ ಇಲ್ಲ. ಆದರು ಅಪ್ಪನೂ ದೇವರು ಸಮಾನರೇ. ತನ್ನ ಮೈಯ ರಕ್ತವನ್ನು ಹಾಲಗಿಸಿ ಮಗೂಗೆ ಕುಡಿಸುವವಳು ತಾಯಿ ಮಗುವಿನ ನೋವನ್ನು ಸಂತೋಷವನ್ನು ಮೊದಲು ತಿಳಿಯುವವಳು ತಾಯಿ ಇಂತಹ ತಾಯಿಯನ್ನ ದೇವರು ಎಂದು ಅನ್ನಲೇ ಬೇಕಲ್ಲವೇ.

ಮನದಾಳದ ಮಾತು

ತುಟಿಯಂಚಲ್ಲಿ ಬಂದ ಮಾತು
ಹೊರಹಾಕಲಾಗದ ಮಾತು
ಮನದಲ್ಲೇ ಮೌನದಿಂದ ಆಡಿದ ಮಾತು
ನನ್ನ ಜೀವನದ ಗುಟ್ಟಾಯಿತು ಈ ಮಾತು
ನಲ್ಲನಿಗೆ ಹೇಳಿ ಬಿಡು ಅಂದಿತ್ತು ಮನದ ಮಾತು
ಈಗ ಹೇಳಿಯೇ ಬಿಡುವೆ ನನ್ನ ಹೃದಯದ ಮಾತು
ಆದರೆ ನಲ್ಲನಾಡಿದ ಮಾತು
ನನ್ನ ಮನದಾಳದ ಮಾತ ಬಚ್ಚಿಡಲು ಪ್ರಯತ್ನಿಸಿತು
ತುಟಿಯಂಚಲ್ಲಿ ಬಂದ ಮಾತು
ನನ್ನ ಮನದಲ್ಲೇ ಸತ್ತು ಹೋಯಿತು
ನನ್ನ ಮನದಾಳದ ಮಾತು

*************************

ಅ೦ದುಕೊಳ್ಳುವುದೊ೦ದು,
ಆಗುವುದು ಇನ್ನೊ೦ದು,
ಹುಡುಕಿ ಹೋದರೆ ಅಲ್ಲಿ
ಸಿಗುವುದು ಮತ್ತೊ೦ದು. !!!
ಬಯಸುವುದು ಮೂರು
ಬೇಕಾಗಿರುವುದು ನೂರು
ಹುಡುಕಿ ಹೋದರೆ ಅಲ್ಲಿ
ಸಿಗುವುದು ಸಾವಿರಾರು

**************************